`ಅಕ್ಷತೆ` ಚಿತ್ರಕ್ಕೆ ಟಾಕಿ ಮುಕ್ತಾಯ
Posted date: 17 Wed, Jun 2015 – 10:00:02 AM
ಶ್ರೀಗುರುಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಯನ್ ಶೃಂಗಾರ್ ಎಂ.ಸಂಜೀವ ಶೆಟ್ಟಿ ಹಾಗೂ ಲಯನ್ ಕೊರಿಯರ್ ಎಸ್.ವೆಂಕಟೇಶ್ ನಿರ್ಮಿಸುತ್ತಿರುವ ‘ಅಕ್ಷತೆ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರು ರಸ್ತೆಯ ಟೊರಿನೊ ಫ಼್ಯಾಕ್ಟರಿಯಲ್ಲಿ ರಾಜ್‌ಸೂರ್ಯನ್, ಅವಿನಾಶ್, ನಿರ್ಮಾಪಕ ಎಸ್.ವೆಂಕಟೇಶ್ ಹಾಗೂ ಸಾಹಸ ಕಲಾವಿದರು ಅಭಿನಯಿಸಿದ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ೨೫ ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. 
ರಾಜು(ದೇವಸಂದ್ರ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎನ್.ವಿ.ನಂದಕುಮಾರ್ ಅವರ ಛಾಯಾಗ್ರಹಣವಿದೆ. ವಿ.ಮನೋಹರ್ ಸಂಗೀತ ನಿರ್ದೇಶನ, ಕುಮಾರ್ ಸಂಕಲನ, ರಾಮು, ಸುರೇಶ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ಪ್ರಭು ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜ್‌ಸೂರ್ಯನ್ ಕಾರ್ತಿಕ್ ಶೆಟ್ಟಿ, ಮೈತ್ರೇಯ ಗೌಡ ವಿನಯಪ್ರಸಾದ್, ಅವಿನಾಶ್, ರಾಜು ತಾಳಿಕೋಟೆ, ಮೈಕಲ್ ಮಧು, ಕುರಿಬಾಂಡ್ ರಂಗ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed